Headlines

​ಗವಿಮಠದ ಪಾವನ ಭೂಮಿಯಲ್ಲಿ ಮುತ್ತು ವಡ್ಡರ ಅವರ 4ನೇ ಕೃತಿ ಲೋಕಾರ್ಪಣೆ.

ಕೊಪ್ಪಳದ ಶ್ರೀ ಗವಿಮಠದಲ್ಲಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಹಾಗೂ ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿಯ ಗಣಿತ ಶಿಕ್ಷಕರಾದ ಶ್ರೀ ಮುತ್ತು ಯ. ವಡ್ಡರ ಇವರ ನಾಲ್ಕನೇ ಕೃತಿ ಬದಲಾಗು ನೀ ಬೆಳಕಾಗು ನೀ ಸರಳವಾಗಿ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಆಶೀರ್ವಾದದೊಂದಿಗೆ ಪರಮಪೂಜ್ಯ ಕೊಪ್ಪಳದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳ ಅಮೃತ ಹಸ್ತದಿಂದ ಶ್ರೀಮಠದ ಭಕ್ತರ ಸಮ್ಮುಖದಲ್ಲಿ ಬಿಡುಗಡೆಯಾಯಿತು. ಪರಮ ಪೂಜ್ಯರು ಇನ್ನೂ ಹೆಚ್ಚಿನ ಕೃತಿಗಳು ನಿಮ್ಮಿಂದ ನಾಡಿಗೆ ಪರಿಚಯವಾಗಲಿ…

Read More

ಖರ್ಗೆ ಹೇಳಿಕೆ ಬೆನ್ನಲ್ಲೇ ನಾಯಕತ್ವ ಬದಲಾವಣೆ ಚರ್ಚೆಗೆ ಫುಲ್ ಸ್ಟಾಪ್; ಗೃಹ ಸಚಿವರ ಮಹತ್ವದ ಪ್ರತಿಕ್ರಿಯೆ.

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕೇಳಿ ಬರುತ್ತಿದ್ದ ನಾಯಕತ್ವ ಬದಲಾವಣೆ ಚರ್ಚೆಗಳಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯು ಪೂರ್ಣವಿರಾಮ ಹಾಕಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದಿದ್ದಾರೆ. ​ರಾಜ್ಯದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂಬ ಖರ್ಗೆಯವರ ಹೇಳಿಕೆಯನ್ನು ಸ್ವಾಗತಿಸಿದ ಸಚಿವರು, “ಖರ್ಗೆಯವರು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮತ್ತು ಅಪಾರ ಅನುಭವ ಹೊಂದಿರುವವರು. ಅವರ…

Read More

ಚಾಮರಾಜನಗರ: ಹೆಚ್ಚಿದ ರಸ್ತೆ ನಿಯಮ ಉಲ್ಲಂಘನೆ.!ಪೊಲೀಸರಿಂದಲೇ ಹೆಲ್ಮೆಟ್ ನಿಯಮ ಗಾಳಿಗೆ!

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ. ಚಾಮರಾಜನಗರ: ಪಟ್ಟಣದಲ್ಲಿ ದಿನೆ ದಿನೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ಅಪ್ರಾಪ್ತರಿಂದ ವಾಹನ ಚಾಲನೆ ಕೂಡ ಹೆಚ್ಚುತ್ತಿದೆ. ಅದರಲ್ಲೂ ಹೆಲ್ಮೆಟ್ ರಹಿತ ಚಾಲನೆ ಹೇಳತೀರದಂತಾಗಿದೆ. ಕಾನೂನು ಪಾಲೀಸಬೇಕಾದ ಪೊಲೀಸರೂ ಸಮವಸ್ತ್ರದಲ್ಲಿದ್ದರೂ ಹೆಲ್ಮೆಟ್ ಧರಿಸದೆ ಓಡಾಡೋದು ಸಾಮಾನ್ಯವಾಗಿದೆ. ಚಾಮರಾಜನಗರ ಅದೇಷ್ಪೊ ಪೊಲೀಸ್ ವರೀಷ್ಟಾದಿಕಾರಿಗಳು ಈಗಾಗಲೇ ಆದೇಶ ಹೊರಡಿಸಿದ್ದು ಕರ್ತವ್ಯ ಅವದಿಯಲ್ಲಿ ಹಾಗೂ ಖಾಸಗೀ ಅವದಿಯಲ್ಲೂ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವುದು.ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಇಲಾಖಾವಾರು ನಿಯಮ ತೆಗೆದುಕೊಳ್ಳಲಾಗುವುದು ಎಂದು ಆದೇಶ ಹೊರಡಿಸುತ್ತಲೆ ಇರ್ತಾರೆ ಆದರೆ ಕೆಲವರು…

Read More

​”ಯಾವ ರೀತಿ ಕ್ರಾಂತಿ ಆಗುತ್ತೋ ನೋಡೋಣ”: ಕಾಂಗ್ರೆಸ್ ಆಂತರಿಕ ಕಲಹಕ್ಕೆ ಕುತೂಹಲ ವ್ಯಕ್ತಪಡಿಸಿದ ಎಚ್‌ಡಿಕೆ.

ಮಾಲೂರು (ಕೋಲಾರ): ರಾಜ್ಯ ಸಚಿವ ಡಿ.ಸುಧಾಕರ್ ಅವರ ಆರೋಗ್ಯ ಸ್ಥಿತಿಯ ಕುರಿತು ರಾಜ್ಯ ಸರ್ಕಾರವು ತಕ್ಷಣವೇ ಸ್ಪಷ್ಟನೆಯನ್ನು ನೀಡಿ ವಾಸ್ತವಾಂಶವನ್ನು ಜನರ ಮುಂದೆ ತೆರೆದಿಡಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸೋಮವಾರ ನಗರದಲ್ಲಿ ಒತ್ತಾಯಿಸಿದ್ದಾರೆ. ಸಚಿವರನ್ನು ನಂಬಿರುವ ಅಭಿಮಾನಿಗಳು ಮತ್ತು ಕ್ಷೇತ್ರದ ಜನರ ಆತಂಕವನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಅವರು ತಿಳಿಸಿದರು. ​ಇದೇ ವೇಳೆ, ಹೆಬ್ಬಟ್ಟಿನ ಗುರುತು ಮತ್ತು ದುರುಪಯೋಗದ ಕುರಿತಾದ ತಮ್ಮ ಹಿಂದಿನ ಹೇಳಿಕೆಗಳ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಕೆಲ ದುರ್ಬುದ್ಧಿಯ…

Read More

ಪಾಲಿಕೆ ಸಮರಕ್ಕೆ ಮುಹೂರ್ತ ಫಿಕ್ಸ್: ಸರ್ಕಾರದ ‘ಮುಂದೂಡಿಕೆ’ ಪ್ಲಾನ್‌ಗೆ ಆಯೋಗದ ಬ್ರೇಕ್!

ಬೆಂಗಳೂರು: ಗ್ರೇಟರ್ ಬೆಂಗಳೂರು ವ್ಯಾಪ್ತಿಯ 5 ಮಹಾನಗರ ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಚುನಾವಣೆ ಆಯೋಗದ ನಡುವೆ ಈಗ ನೇರ ಹಣಾಹಣಿ ಶುರುವಾಗಿದೆ. ಮಾನ್ಯ ಸುಪ್ರೀಂ ಕೋರ್ಟ್ ನೀಡಿರುವ ಗಡುವಿನಂತೆ ಜೂನ್ 30, 2026 ರೊಳಗೆ ಚುನಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆಯೋಗವು ಪಣತೊಟ್ಟಿದ್ದು, ಈ ಬಗ್ಗೆ ಇಂದು ಅಧಿಕೃತ ಪ್ರಕಟಣೆ ಹೊರಡಿಸಿದೆ. ​ವಾಸ್ತವದಲ್ಲಿ, ರಾಜ್ಯ ಸರ್ಕಾರವು ಜನಗಣತಿ ಕಾರ್ಯ ಮತ್ತು ಶೈಕ್ಷಣಿಕ ಪರೀಕ್ಷೆಗಳ ನೆಪವೊಡ್ಡಿ ಚುನಾವಣೆಯನ್ನು ಸೆಪ್ಟೆಂಬರ್ ಅಂತ್ಯದವರೆಗೆ ಮುಂದೂಡುವಂತೆ ಆಯೋಗಕ್ಕೆ ಮನವಿ ಮಾಡಿತ್ತು….

Read More

ಸಂಪುಟಕ್ಕೆ ಸರ್ಜರಿ ಫಿಕ್ಸ್? 50% ಸಚಿವರಿಗೆ ಗೇಟ್‌ಪಾಸ್‌ ಸಾಧ್ಯತೆ!

ಹುಬ್ಬಳ್ಳಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಯಾವುದೇ ಪ್ರಸ್ತಾಪವಿಲ್ಲ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಸ್ಪಷ್ಟಪಡಿಸಿದ್ದಾರೆ. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಸುಭದ್ರವಾಗಿದೆ. ಈ ಬಗ್ಗೆ ಹೈಕಮಾಂಡ್ ಈಗಾಗಲೇ ಸ್ಪಷ್ಟ ಸೂಚನೆ ನೀಡಿದ್ದು, ಅನಗತ್ಯ ಗೊಂದಲಗಳಿಗೆ ಅವಕಾಶವಿಲ್ಲ ಎಂದರು. ​ಸಚಿವ ಸಂಪುಟ ವಿಸ್ತರಣೆಯ ಕುರಿತು ಮಾತನಾಡಿದ ಅವರು, ಮೇ 20ರೊಳಗೆ ಸಂಪುಟ ಪುನಾರಚನೆಯಾಗುವ ವಿಶ್ವಾಸವಿದೆ. ಉಪ ಚುನಾವಣೆಗಳ ಫಲಿತಾಂಶ ಮೇ 4ರಂದು…

Read More

ಹುಲಿಕೆರೆ ಪಿಡಿಓ ಸೀನನ ಡೀಲ್ ಗೆ ಬಗ್ಗಿದ ಶ್ರೀರಂಗಪಟ್ಟಣ ಎಂಎಲ್ಎ!?

ಅಕ್ರಮಗಳ ಸರದಾರ ಹುಲಿಕೆರೆ ಪಂಚಾಯಿತಿ ಪಿಡಿಒ ಶ್ರೀನಿವಾಸನ ಆರ್ಭಟದ ಮುಂದೆ ಎಂಎಲ್ಎ ರಮೇಶ್ ಬಂಡಿಸಿದ್ದೇಗೌಡ್ರು ಬಂಡಿ ಬಿಡಬೇಕಷ್ಟೇ.ಸೀನನ ಎಂಜಲು ಕಾಸಿಗೆ ಕೈ ಒಡ್ಡಿ ಮೂರು ಕಾಸಿನ ಮರ್ಯಾದೆಯೂ ಇಲ್ಲದಂತೆ ಮಾಡಿಕೊಂಡ ರಮೇಶ್ ಬಂಡಿಸಿದ್ದೇಗೌಡ್ರು, ಶಾಸಕನಾಗಿ ಜನತೆಯ ಹಿತ ಕಾಯಬೇಕಾದ ರಮೇಶ್ ಬಂಡಿಸಿದ್ದೇಗೌಡ ಎಂಬ ನಾಲಾಯಕ್ ವ್ಯಕ್ತಿ ಒಬ್ಬನನ್ನು ಗೆಲ್ಲಿಸಿದ ತಪ್ಪಿಗಾಗಿ ಇಡೀ ಶ್ರೀರಂಗಪಟ್ಟಣ ತಾಲೂಕಿನ ಜನತೆ ತಮ್ಮ ನಟಿಕೆ ಮುರಿಯುತ್ತಾ ಶಾಪ ಹಾಕುತ್ತಿದ್ದಾರೆ. ಇವನ ಧನದಾಹಕ್ಕೆ ಸಾಲು ಸಾಲು ಅಕ್ರಮ ನಡೆದರು ಇವನೇ ಮುಚ್ಚಿ ಹಾಕುತ್ತಿದ್ದಾನೆ. ಒಂದು…

Read More

​ಬೂದನೂರು ಭೂ ಹಗರಣ: ಸರ್ಕಾರಿ ರಸ್ತೆಯನ್ನೇ ನುಂಗಿ 41 ಲಕ್ಷ ಲಪಟಾಯಿಸಿದ ‘ಕಿಲಾಡಿ’ಗಳು!

ಭ್ರಷ್ಟ ಪಿಡಿಒಗೆ ಸಂಕಷ್ಟ! ಶಿಸ್ತು ಕ್ರಮಕ್ಕೆ ಮಂಡ್ಯ ಸಿಇಒಗೆ ಜಿಲ್ಲಾಧಿಕಾರಿಗಳ ಸೂಚನೆ. ಮಂಡ್ಯ ಜಿಲ್ಲೆಯ ಬೂದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನ ಪ್ರಕ್ರಿಯೆಯ ಬೃಹತ್ ಹಗರಣವೊಂದು ಈಗ ಬಯಲಿಗೆ ಬಂದಿದ್ದು, ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮಕ್ಕೆ ಸಾಕ್ಷಿಯಾಗಿದೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ (NH-275) ನಿರ್ಮಾಣದ ಸಂದರ್ಭದಲ್ಲಿ ಸಾರ್ವಜನಿಕ ಬಳಕೆಗೆ ಮೀಸಲಾಗಿದ್ದ ರಸ್ತೆಯನ್ನೇ ಖಾಸಗಿ ಆಸ್ತಿ ಎಂದು ಬಿಂಬಿಸಿ, ಲಕ್ಷಾಂತರ ರೂಪಾಯಿ ಪರಿಹಾರ ಪಡೆದಿರುವುದು ತನಿಖೆಯಿಂದ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಡಾ….

Read More

ಸಕಲೇಶಪುರ: ಅನಾಥ ವೃದ್ಧೆಗೆ ಆಶ್ರಯ ಕಲ್ಪಿಸಿ ಮಾನವೀಯತೆ ಮೆರೆದ ಸೈಯದ್ ಇದ್ರೀಸ್

ಸಕಲೇಶಪುರ ನಗರದ ಮಹೇಶ್ವರಿ ನಗರದಲ್ಲಿ ಕಳೆದ ಕೆಲವು ದಿನಗಳಿಂದ ಅತಂತ್ರ ಸ್ಥಿತಿಯಲ್ಲಿ ರಸ್ತೆ ಬದಿಯೇ ವಾಸವಾಗಿದ್ದ 65 ವರ್ಷದ ವೃದ್ಧೆ ನಂಜಮ್ಮ ಅವರಿಗೆ ಸಾಮಾಜಿಕ ಕಾರ್ಯಕರ್ತ ಸೈಯದ್ ಇದ್ರೀಸ್ ಅವರು ಆಸರೆಯಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ​ವಯೋವೃದ್ಧ ಮಹಿಳೆಯೊಬ್ಬರು ರಸ್ತೆ ಬದಿಯಲ್ಲಿ ಸಂಕಷ್ಟಕರ ಪರಿಸ್ಥಿತಿಯಲ್ಲಿ ದಿನದೂಡುತ್ತಿದ್ದಾರೆ ಎಂಬ ಮಾಹಿತಿಯನ್ನು ಸ್ಥಳೀಯರಾದ ಪ್ರೇಮ ಅವರು ದೂರವಾಣಿ ಮೂಲಕ ಸೈಯದ್ ಇದ್ರೀಸ್ ಅವರ ಗಮನಕ್ಕೆ ತಂದಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಇದ್ರೀಸ್, ತಮ್ಮ ಸ್ನೇಹಿತ ಹಾಗೂ ಫಾತಿಮಾ ಮಸ್ಜಿದ್ ಅಧ್ಯಕ್ಷರಾದ…

Read More

ಸಾಥನ್‌ಕುಲಂ ಹಂತಕರಿಗೆ ಶಾಸ್ತಿ: 9 ಪೊಲೀಸರಿಗೆ ಮರಣದಂಡನೆ.

2020ರ ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ತಮಿಳುನಾಡಿನ ಸಾಥನ್‌ಕುಲಂ ತಂದೆ-ಮಗನ ಕಸ್ಟಡಿಯಲ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುರೈ ಜಿಲ್ಲಾ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದೆ. ವಿಚಾರಣಾಧೀನ ಕೈದಿಗಳಾಗಿದ್ದ ವ್ಯಾಪಾರಿ ಪಿ. ಜಯರಾಜ್ ಮತ್ತು ಅವರ ಮಗ ಬೆನ್ನಿಕ್ಸ್ ಅವರನ್ನು ಕ್ರೂರವಾಗಿ ಚಿತ್ರಹಿಂಸೆ ನೀಡಿ ಕೊಂದ ಆರೋಪ ಸಾಬೀತಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ಸ್‌ಪೆಕ್ಟರ್ ಸೇರಿದಂತೆ ಒಟ್ಟು ಒಂಬತ್ತು ಪೊಲೀಸರಿಗೆ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿದೆ. ಪ್ರಕರಣದ ಹಿನ್ನೆಲೆ 2020ರಲ್ಲಿ ರಾತ್ರಿ ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯ…

Read More
error: Content is protected !!